ಬೆಂಗಳೂರುಃ ಉಪೇಂದ್ರ ರಾಜಕೀಯ ಎಂಟ್ರಿ ಈಗಾಗಲೇ ಕರ್ನಾಟಕದಲ್ಲಿ ಸಂಚಲನವನ್ನೇ ಉಂಟುಮಾಡಿದ್ದು, ರಾಜಕೀಯ ನಾಯಕರ ಕಿತ್ತಾಟ, ಭ್ರಷ್ಟಾಚಾರದಿಂದ ಕಂಗೆಟ್ಟ ಕರ್ನಾಟಕಕ್ಕೆ ಟಾನಿಕ್ ಆಗಲಿದೆಯೇ ಎಂಬ ಕುತೂಹಲ ಉಂಟುಮಾಡಿದೆ. ರಾಜಕೀಯದಲ್ಲಿ ಎನಾದರೂ ಬದಲಾವಣೆ ಬೇಕೆಂದು ಕಾಯುತ್ತಿದ್ದ ಜನರಿಗೆ ಸರಿಯಾದ ಸಮಯದಲ್ಲಿ ಉಪೇಂದ್ರ ಭರ್ಜರಿ ಕೊಡುಗೆ ನೀಡಿದ್ದಾರೆ. ಕಾರ್ಮಿಕರು ಧರಿಸುವ ಖಾಕಿಬಟ್ಟೆ ತೊಟ್ಟು ರಾಜಕೀಯಾ ಅಖಾಡಕ್ಕೆ ಇಳಿದ ಉಪ್ಪಿ, ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಬೇಕೆನ್ನುವ ಬಹುದಿನದ ಬೇಡಿಕೆ ಈಡೇರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಉಪೇಂದ್ರ ನಡೆಗೆ ಈಗಾಗಲೇ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಹಲವಾರು ಓದುಗರು "ಪ್ರಜಾಕಾರಣ" ಪಕ್ಷ ಸೇರಲು ಕಾಯುತ್ತಿದ್ದಾರೆ, ನೇರನ್ಯೂಸ್ ಗೆ ಇಮೇಲ್ ಮಾಡಿರುವ ಓದುಗರು ಪಕ್ಷ ಸೇರಲು ದಾರಿಯಾವುದು ಎಂದಿದ್ದಾರೆ. ಉಪೇಂದ್ರ ಪಕ್ಷ ಸೇರಲು ನೀವು ಮಾಡಬೇಕಾಗಿರುವುದಿಷ್ಟೇ. ನಿಮ್ಮ ಊರಿಗೆ ನೀವು ಯಾವ ರೀತಿ ಜನಸೇವೆ ಮಾಡಬಹುದು ಎಂದು ಇಮೇಲ್ ಮಾಡಿ. ಇಮೇಲ್ ವಿಳಾಸ -
ಈ ಪೋಸ್ಟನ್ನು ಶೇರ್ ಮಾಡಿ ಉಪೇಂದ್ರರ ಈ ಸಾಹಸಕ್ಕೆ ನಿಮ್ಮ ಕೊಡುಗೆ ನೀಡಿ.