ಯಡಿಯೂರಪ್ಪ ಮಣಿಸಲು ಸಿದ್ದರಾಮಯ್ಯ ಕುತಂತ್ರ - ಸುಳ್ಳು ಸಾಕ್ಷಿ ಹೇಳಲು ಬ್ಲಾಕ್ ಮೇಲ್ -ದೂರು ದಾಖಲು

og:image


ಬೆಂಗಳೂರುಃ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿಗೆ ಕಳುಸಿಸಬೇಕೆಂದು ಜಿದ್ದಿಗೆ ಬಿದ್ದಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಎ.ಸಿ.ಬಿ.ಯನ್ನು ದುರ್ಭಳಕೆ ಮಾಡಿರುವ ಘಟನೆ ಬಯಲಿಗೆ ಬಂದಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಡಿನೋಟಿಫೈ ಮಾಡಲಾಗಿದೆ ಎಂದು ಕೇಸು ದಾಖಲಿಸಿ, ವಿಚಾರಣೆ ನಡೆಸುತ್ತಿರುವ ಎ.ಸಿ.ಬಿ, ಯಡಿಯೂರಪ್ಪ ವಿರುದ್ದ ಸುಳ್ಳು ಸಾಕ್ಷ ಹೇಳಲು ಅಧಿಕಾರಿಯೊಬ್ಬರನ್ನು ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ.
ಬಸವರಾಜೇಂದ್ರ ಎಂಬ ಅಧಿಕಾರಿ, ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಅ ಪತ್ರದ ಪ್ರಕಾರ, ಯಡಿಯೂರಪ್ಪ ವಿರುದ್ಧ ಸುಳ್ಳು ಸಾಕ್ಷಿ ಹೇಳದಿದ್ದರೆ ನಿಮ್ಮ ಮೇಲೆ ಕೇಸ್ ಹಾಕಲಾಗುವುದು ಮತ್ತು ಪ್ರಮೋಶನ್ ಸಿಗದಂತೆ ತಡೆಯಲಾಗುವುದು ಎಂದು ಬೆದರಿಸಿದ್ದಾರೆ ಎಂದು ದೂರಿದ್ದಾರೆ. ಎ.ಸಿ.ಬಿ. ಯ ಅಧಿಕಾರಿಗಳಾದ ಅಂತೋಣಿ ಮತ್ತು ರಾಜೇಂದ್ರ ಇವರು, ಬಸವರಾಜೇಂದ್ರ ರಿಗೆ ಕಾಲ್ ಮಾಡಿ ಈ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ ಃ "ನಿಮಗೆ ಅಧಿಕ ಪ್ರಸಂಗ ಯಾಕೆ??" ಶಾಲಾಮಕ್ಕಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಹಿಗ್ಗಾಮಗ್ಗ ತರಾಟೆ

English Summary:Siddaramaiah misusing ACB
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post