ಕನ್ನಡದಲ್ಲಿ ಯಾವ ನಿರ್ದೇಶಕ ಬ್ಯೂಸಿ ಇರುತ್ತಾರೂ ಗೊತ್ತಿಲ್ಲ, ಆದರೆ ಪಿಸಿ ಶೇಖರ್ ಮಾತ್ರ ಯಾವಗ ನೋಡಿದ್ರು ಒಂದೊಂದು ಹೊಸ ಚಿತ್ರ ಘೋಷಣೆ ಮಾಡಿ ಬಿಡುಗಡೆ ಕೂಡಾ ಮಾಡುತ್ತಾರೆ. ೨೦೧೦ರಲ್ಲಿ "ನಾಯಕ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರಯಾಣ ಪ್ರಾರಂಭ ಮಾಡಿದ ಶೇಖರ್, ಇತ್ತೀಚೆಗಿನ "ರಾಗ" ಚಿತ್ರದವರೆಗು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವಂತಹ ಪ್ರತಿಭಾವಂತ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸೇರಿ "ರೊಮಿಯೋ" ಮತ್ತು "ಸ್ಟೈಲ್ ಕಿಂಗ್" ಚಿತ್ರ ಮಾಡಿರುವ ಇವರು, ಈಗ ತಮ್ಮ ಮುಂದಿನ ಚಿತ್ರವನ್ನು ಚೇತನ್ ಅಹಿಂಸಾ ಜೊತೆ ಸೇರಿ ಮಾಡುತ್ತಿದ್ದಾರೆ.
ಇನ್ನು ಚೇತನ್, ಆ ದಿನಗಳು, ಮೈನಾ ದಂತಹ ಸುಪರ್ ಹಿಟ್ ಚಿತ್ರಗಳ ನಾಯಕ. ಅವರ ಇತ್ತೀಚಿನ ಚಿತ್ರ "ನೂರೊಂದು ನೆನಪು" ನೆಲಕಚ್ಚಿತ್ತು. ಪಿಸಿ ಶೇಖರ್ ಜೊತೆಗಿನ ಚಿತ್ರ ಅವರಿಗೆ ಹೊಸ ಇಮೇಜ್ ತರಲಿ ಎಂದು ನೇರ ನ್ಯೂಸ್ ಆಶಿಸುತ್ತದೆ.
ಇನ್ನು ಚೇತನ್, ಆ ದಿನಗಳು, ಮೈನಾ ದಂತಹ ಸುಪರ್ ಹಿಟ್ ಚಿತ್ರಗಳ ನಾಯಕ. ಅವರ ಇತ್ತೀಚಿನ ಚಿತ್ರ "ನೂರೊಂದು ನೆನಪು" ನೆಲಕಚ್ಚಿತ್ತು. ಪಿಸಿ ಶೇಖರ್ ಜೊತೆಗಿನ ಚಿತ್ರ ಅವರಿಗೆ ಹೊಸ ಇಮೇಜ್ ತರಲಿ ಎಂದು ನೇರ ನ್ಯೂಸ್ ಆಶಿಸುತ್ತದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment