ಸುಶಾಂತ್ ಕೇಸ್ ಸಿಬಿಐಗೆ - ನಿತೀಶ್ ಕುಮಾರ್ ಸರ್ಕಾರ ಶೀಘ್ರ ಆದೇಶ ಸಾಧ್ಯತೆ

og:image

ಬಿಹಾರ: ಕೊನೆಗೂ ಸಾವಿರಾರು ಸುಶಾಂತ್ ಅಭಿಮಾನಿಗಳ ಒತ್ತಾಯಕ್ಕೆ ಸರ್ಕಾರ ಮಣಿದಿರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಬಿಹಾರದ ನಿತಿಶ್ ಕುಮಾರ್ ಸರ್ಕಾರ ಸುಶಾಂತ್ ಸಿಂಗ್ ಕೇಸನ್ನು ಸಿಬಿಐಗೆ ಹಸ್ತಾಂತರಿಸುವ ಯೋಜನೆ ಮಾಡುತ್ತಿದೆ. 
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಈ ಹಿಂದೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾಗ, ಬಿಹಾರದ ಕಾಂಗ್ರೆಸ್ ಇನ್‌ಚಾರ್ಜ್ ಶಕ್ತಿಶಿನ್ ಗೋಹಿಲ್ ಮಹಾರಾಷ್ಟ್ರ ಸರ್ಕಾರವನ್ನು ಸಮರ್ಥಿಸಿಕೊಂಡರು, “ಬಿಹಾರ ಪೊಲೀಸರು ಕೆಸರೆರಚಾಟ ಮತ್ತು ಆರೋಪಗಳನ್ನು ಮಾಡುವ ಬದಲು ತನಿಖೆಯತ್ತ ಗಮನ ಹರಿಸಬೇಕು. ಸುಶಾಂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಗಂಭೀರವಾದ ಅಭಿಪ್ರಾಯವನ್ನು ತೆಗೆದುಕೊಂಡ ಮಹಾರಾಷ್ಟ್ರದ ಸಿಎಂ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ತೊರತ್ಜಿ, ಗೃಹ ಸಚಿವ ಅನಿಲ್ ದೇಶ್ಮುಖ್ಜಿ ಮತ್ತು ಇತರರಿಗೆ ನಾನು ಧನ್ಯವಾದ ಹೇಳಬೇಕು.” ಎಂದು ಮಹಾರಾಷ್ಟ್ರ ಸರ್ಕಾರವನ್ನು ಸಮರ್ಥಿಸಿದ್ದರು. 

ಬಿಹಾರದ ಪೊಲೀಸರು ಸುಶಾಂತ್ ಸಿಂಗ್ ಕೇಸ್ ತನಿಖೆ ಮಾಡಲು ಮುಂಬಾಯಿಗೆ ಹೋದಾಗ ಅವರನ್ನು ಕ್ವಾರಂಟೈನ್ ಮಾಡಿದ್ದು, ದಿಶಾ ಸಾಲ್ಯಾನ್ ಕೇಸ್ ಫೈಲ್-ಗಳು ಡಿಲೀಟ್ ಆಗಿದೆ ಎಂದು ಅಚ್ಚರಿಯ ಸಮಜಾಯಿಸಿ ನೀಡಿದ್ದರು. ಇವೆಲ್ಲಾ ಸುಶಾಂತ್ ಅಭಿಮಾನಿಗಳಲ್ಲಿ ಕ್ರೋದ ಉಂಟು ಮಾಡಿದ್ದು, ಇದೀಗ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಕೇಸನ್ನು ಸಿಬಿಐಗೆ ವಹಿಸಿದರೆ, ಸುಶಾಂತ್ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಅಭಿಮಾನಿಗಳು ಸಮಾಧಾನ ಪಟ್ಟುಕೊಳ್ಳಬಹುದು. 

ಇದನ್ನೂ ಓದಿ :



English Summary: sushant case cbi bihar govt। NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post