ಕೊನೆಗೂ ಇ.ಡಿ ಮುಂದೆ ಪ್ರತ್ಯಕ್ಷಳಾದ ರಿಯಾ ಚಕ್ರವರ್ತಿ

og:image

ಸುಶಾಂತ್ ಸಿಂಗ್ ರಜಪೂತ್ 'ಆತ್ಮಹತ್ಯೆ' ಕೇಸು ರಿಯಾ ಚಕ್ರವರ್ತಿ ಕುತ್ತಿಗೆಗೆ ಉರುಳಾಗಿದ್ದು, ಸಿಬಿಐ ತನಿಖೆ ಪ್ರಾರಂಭವಾದ ದಿನದಿಂದ ಒಂದಲ್ಲ ಒಂದು ರೀತಿಯಿಂದ ಅವಳನ್ನು ಕಾಡುತ್ತಿದೆ. ಇ.ಡಿ (ಜಾರಿ ನಿರ್ದೇಶನಾಲಯ) ಬಲೆಯಿಂದ ತಪ್ಪಿಸಲು ಏನೆಲ್ಲಾ ನಾಟಕ ಮಾಡಿದ್ದರೂ, ಕೊನೆಗೂ ನ್ಯಾಯದ ಮುಂದೆ ತಲೆಬಾಗಲೇ ಬೇಕಾಯಿತು. 
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಇಂದು ರಿಯಾ ಇ.ಡಿ ಮುಂದೆ ಬಂದಿದ್ದು, ತನಿಖೆ ನಡೆಯುತ್ತಿದೆ. ಒಂದು ವಾರದಿಂದ ಅಜ್ಣಾತವಾಗಿದ್ದ ರಿಯಾ, ಇಂದು ಯಾವುದೇ ದಾರಿ ಕಾಣದೆ ಇ.ಡಿ ಮುಂದೆ ತನಿಖೆಗೆ ಆಗಮಿಸಿದ್ದಾರೆ. ಇ.ಡಿ ರಿಯಾ ಚಕ್ರವರ್ತಿಯನ್ನು ಹಣಕಾಸಿನ ವಿಷಯದಲ್ಲಿ ತನಿಖೆ ನಡೆಸುತ್ತಿದೆ. ರಿಯಾಳ ಅಕೌಂಟಿನಲ್ಲಿ ಬರೀ ೧೪ ಲಕ್ಷ ಇದ್ದರೂ, ಮುಂಬಾಯಿಯಲ್ಲಿ ೨ ಕಡೆ ಆಸ್ತಿ ಮಾಡಿಕೊಂಡಿರುವುದು ಇ.ಡಿ ಗಮನಕ್ಕೆ ಬಂದಿದ್ದು, ಇದು ಈ ತನಿಖೆಯಲ್ಲಿ ಮಹತ್ವ ಪಡೆದಿದೆ. 
ಜಾರಿ ನಿರ್ದೇಶನಾಲಯ(Enforcement Directorate - ED) ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದ್ದು ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗವಾಗಿದೆ. ಭಾರತೀಯ ಆಡಳಿತಾತ್ಮಕ ಸೇವಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗು ಆದಾಯ ತೆರಿಗೆ ಅಧಿಕಾರಿಗಳನ್ನು ಈ ಸಂಸ್ಥೆ ಒಳಗೊಂಡಿರುತ್ತದೆ.

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post