ಮುಂಜಾನೆ ಹಸು ಸಾಗಣೆ - ಗಾಡಿಯಿಂದ ಎಳೆದು ಹಾಕಿ ಇಬ್ಬರ ಹತ್ಯೆಮಾಡಿದ ಜನರ ಗುಂಪು

og:image
ಜಲ್ಪೈಗುರಿ, ಜ. 27: ಪಿಕ್ ಅಪ್ ವಾಹನದಲ್ಲಿ ಹಸು ಸಾಗಿಸುತ್ತಿದ್ದ ಇಬ್ಬರನ್ನು, ಗಾಡಿಯಿಂದ ಕೆಳಗೆ ಎಳೆದು ಹಾಕಿ, ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜಲ್ಪೈಗುರಿ ಜಿಲ್ಲೆಯ ಬರೋರಿಯಾ ಗ್ರಾಮದಲ್ಲಿ ಇಬ್ಬರು, ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ವರ್ ಹುಸೇನ್ (19) ಮತ್ತು ಹಫಿಝುಲ್ ಶೇಖ್ (19) ಎಂಬ ಇಬ್ಬರು ಜನರ ಗುಂಪಿನಿಂದ ಕೊಲ್ಲಲ್ಪಟ್ಟವರು. ಮುಂಜಾನೆ, ಈ ಇಬ್ಬರೂ ಹಸುಗಳನ್ನು ಸಾಗಿಸುತ್ತಿದ್ದಾಗೆ ಅಡ್ಡಗಟ್ಟಿದ ಜನರ ತಂಡ, ಅವರನ್ನು ಗಾಡಿಯಿಂದ ಹೊರಗೆ ಎಳೆದು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಪಿಕ್-ಅಪ್ ವ್ಯಾನ್ ಕೂಡ ಹಾನಿಗೊಳಗಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹುಸೇನ್ ಮತ್ತು ಶೇಖ್ ಅವರನ್ನು ಧುಪ್ಪುರಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿನ ವೈದ್ಯರು ಇವರಿಬ್ಬರೂ ಮ್ರತ ಪಟ್ಟಿದ್ದಾರೆ ಎಂದು ಘೋಷಿಸಿದರು.

ಮುಂಜಾಗ್ರುತಾ ಕ್ರಮವಾಗಿ, ಈ ಪ್ರದೇಶದಲ್ಲಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post