DySP ಗಣಪತಿ ಆತ್ಮಹತ್ಯೆ ಸುತ್ತ ಸಂಶಯದ ಹುತ್ತ - ಸಾಕ್ಷ ನಾಶ ಮಾಡಿರುವ ಶಂಕೆ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image
ಬೆಂಗಳೂರು, ಆಗಸ್ಟ್ 24: ಆಗಿನ ಉಪ ಪೊಲೀಸ್ ಅಧೀಕ್ಷಕ ಎಂ. ಕೆ. ಗಣಪತಿಯವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗಲೂ ತಯಾರಿದೆ ಎಂದು ತೋರಿಸಿಕೊಟ್ಟಿದೆ.

ಎಂ. ಕೆ. ಗಣಪತಿಯವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇರುವ ಎಲ್ಲಾ ಮಾಹಿತಿ, ದಾಖಲೆಗಳು ಮತ್ತು ಸಾಕ್ಷ್ಯಗಳು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಚಾನಲ್ ಒಂದು ವರದಿಮಾಡಿದೆ.

ಗಣಪತಿಯವರು ತನ್ನ ಕೊನೆಯ ರಾತ್ರಿ ಇದ್ದ ಲಾಡ್ಜ್ನಲ್ಲಿರುವ ಕೊಠಡಿಯ ಬಾಗಿಲು ಒಳಗಿನಿಂದ ತೆರೆದ್ದಿದ್ದು, ಹೊರಗಿನಿಂದ ಮುಚ್ಚಲ್ಪಟ್ಟಿತ್ತು ಎಂದು ಹೇಳಲಾಗಿದೆ. ಸೀಲಿಂಗ್ ಫ್ಯಾನ್ನಿಂದ ಗಣಪತಿಯ ದೇಹವನ್ನು ತರುವ ಮೊದಲು ಫಿಂಗರ್ ಮುದ್ರಣಗಳನ್ನು ಸಂಗ್ರಹಿಸಲಾಗಲಿಲ್ಲ. ಬುಲೆಟ್ ಗುರುತುಗಳು ದೇಹದಲ್ಲಿ ಕಂಡುಬಂದಿವೆ. ಈ ಮಾಹಿತಿಗಳನ್ನು ಬೇಕೆಂದೇ ಮುಚ್ಚಲಾಗಿದ್ದು, ಈಗ ಟಿವಿ ಚಾನೆಲ್ ಬಹಿರಂಗ ಪಡಿಸಿದೆ. ಅಷ್ಟೇ ಅಲ್ಲದೇ, ಸಾಕ್ಷಿಗಳ ಪೈಕಿ ಒಬ್ಬರು ತನ್ನನ್ನು ಖಾಲಿ ಕಾಗದದ ಮೇಲೆ ಸಹಿ ಹಾಕುವಂತೆ ಮಾಡಿದ್ದಾರೆಂದು ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಒಳಗೊಂಡಂತೆ ಇತರರ ಮಾಹಿತಿಗಳು ಗಣಪತಿಯ ಮೊಬೈಲ್ ನಲ್ಲಿದ್ದಿದ್ದು, ಅದನ್ನು ನಾಶಮಾಡಲಾಗಿದೆ. ಅದರಲ್ಲಿ ಕೇಂದ್ರ ಸಚಿವ, ಮಾಜಿ ಸಚಿವರು, ಮತ್ತು ಎಂಎಲ್ಎಗಳ ದೂರವಾಣಿ ಸಂಖ್ಯೆಗಳು, 2,500 ಛಾಯಾಚಿತ್ರಗಳು, 57 ಸಂದೇಶಗಳು, ಮತ್ತು 100 ಇ-ಮೇಲ್ಗಳು ಸಹ ಅಳಿಸಲಾಗಿದೆ. 145 ಪುಟಗಳನ್ನು ಒಳಗೊಂಡಿರುವ ಒಂದು ಪಿಡಿಎಫ್ ಫೈಲ್ ನಾಶವಾಗಿದೆಯೆಂದು ಕಂಡುಬಂದಿದೆ. ಚಾನಲ್ ವರದಿಯು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ ಮಾಡಲಾಗಿದೆ.

ಕಾಂಗ್ರೆಸ್ ಶಾಸಕ ಮುನಿರತ್ನ, ಕೇಂದ್ರ ಸಚಿವ ಸದಾನಂದ ಗೌಡ ಅವರ ಮಗ ಕಾರ್ತಿಕ್ ಗೌಡ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಡೈರೆಕ್ಟರ್ ಜನರಲ್ ಆರ್.ಕೆ. ದತ್ತಾ ಅವರ ಪುತ್ರ ಅಭಿಜಾಯಿಯವರ ವಿವರಗಳನ್ನು ಮುಖ್ಯವಾಗಿ ಅಳಿಸಲಾಗಿದೆ ಎನ್ನಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News