ಧೋನಿ, ಭುವನೇಶ್ವರ್ ತಾಳ್ಮೆಯ ಜೊತೆಯಾಟ - ಶ್ರೀಲಂಕಾ ವಿರುದ್ಧ 3-ವಿಕೆಟ್ ಜಯ

og:image
ಪಲ್ಲೆಕೆಲೆ: ಒತ್ತಡದ ಸಂದರ್ಭಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅನುಭವವು, ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಗೊಳಿಸಲು ಯಶಸ್ವಿಯಾಯಿತು. ಭಾರತವು ಗುರುವಾರ ಇಲ್ಲಿನ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ವಿಕೆಟ್ ಗಳ ಗೆಲುವು ಪಡೆದಿದೆ.
ಇದನ್ನು ಮಿಸ್ಸ್ ಮಾಡಬೇಡಿ ಃ ಬಾಲ್ ಸ್ಟಂಪ್ ಗೆ ಬಿದ್ದರೂ ಧೋನಿ ಔಟ್ ಆಗಿಲ್ಲ - ಶ್ರೀಲಂಕಾ ಪಂದ್ಯದಲ್ಲಿ ಘಟನೆ - ವಿಡಿಯೋ ನೋಡಿ
ಧೋನಿ 68 ಎಸೆತಗಳಲ್ಲಿ 45 ರನ್ ಗಳಿಸಿದರು. ಆದರೆ ಅವರು ತುಂಬಾ ತಾಲ್ಮೆಯಿಂದ ಭುವನೇಶ್ವರ್ ಕುಮಾರ್ (53 ನಾಟ್ ಔಟ್) ಜೊತೆಗೂಡಿ ಎಂಟನೇ ವಿಕೆಟ್ಗೆ 100 ರನ್ಗಳನ್ನು ಪೇರಿಸಿದರು. ಹೀಗಾಗಿ 44.2 ಓವರ್ಗಳಲ್ಲಿ 231 ರನ್ಗಳ ಗೆಲುವಿನ ಗುರಿ ತಲುಪಿದರು ಹೀಗಾಗಿ ಡಕ್ವರ್ತ್-ಲೆವಿಸ್-ಸ್ಟರ್ನ್ ವಿಧಾನದ ಅಡಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿತು.

ಇದನ್ನೂ ಓದಿ ಃ "ನಮಗೂ ಅಲ್ಪಸಂಖ್ಯಾತರಂತೆ 12-15% ಮೀಸಲಾತಿ ನೀಡಿ" ಲಿಂಗಾಯತರು - ಕಾಂಗ್ರೆಸ್-ಗೆ ಸಂಕಷ್ಟ

ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗ 2-0 ಮುನ್ನಡೆ ಸಾಧಿಸಿದೆ.

ಧೋನಿ ಮತ್ತು ಭುವನೇಶ್ವರ್ ಅವರು ಸೇರಿಕೊಂಡಾಗ ಭಾರತ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಅವರಿಬ್ಬರ ತಾಳ್ಮೆಯ ಆಟ ಭಾರತಕ್ಕೆ ವರದಾನವಾಯಿತು.

ಇದನ್ನೂ ಓದಿಃ DySP ಗಣಪತಿ ಆತ್ಮಹತ್ಯೆ ಸುತ್ತ ಸಂಶಯದ ಹುತ್ತ - ಸಾಕ್ಷ ನಾಶ ಮಾಡಿರುವ ಶಂಕೆ 

ಇವತ್ತಿನ ರನ್ ಚೇಸ್ ಗುರಿ ದೊಡ್ದದಲ್ಲವಾದರೂ, ಧೋನಿ ಅವರ ಚೇಸಿಂಗ್ ಕೌಶಲ್ಯಗಳನ್ನು ಪರೀಕ್ಷೆಗೆ ಒಳಪಡಿಸಿದಂತಾಗಿದೆ. ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ತಾಳ್ಮೆಯ ಆಟದ ಜೊತೆಗೆ ಇನಿಂಗ್ಸ್ ಕೇವಲ ಒಂದು ಬೌಂಡರಿ ಹೊಂದಿತ್ತು.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post