![og:image](https://blogger.googleusercontent.com/img/b/R29vZ2xl/AVvXsEgfyRMC6HsEuCqkRAmCxodER64wMMeWpfoOXHGlsCwGED0nIhtJe709OyQge9VTVx0TqaGUHxcNaz8-y3VjFtPxoabZWkl16yUY81Ti0Px_kBqqS5cVncRoBmtZOTVTrt64nRcmWHR-vpZF/s640-rw/Kumarwami+Looses+power.jpg)
ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಿದ್ದು, ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ ಇಂದು (ಮಂಗಳವಾರ) ಮುಂದುವರಿದಿದ್ದು, ನಿರ್ಣಯವನ್ನು ಸ್ಪೀಕರ್ ಮತಕ್ಕೆ ಹಾಕಿದ್ದಾರೆ. ಇದಕ್ಕೂ ಮೊದಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಕುಮಾರಸ್ವಾಮಿ ಅವರಿಗೆ ವಿಶ್ವಾಸವನ್ನು ಸಾಬೀತುಪಡಿಸಲು ಎರಡು ಬಾರಿ ಗಡುವು ನೀಡಿದ್ದರು. 15 ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಜೆಡಿಎಸ್–ಕಾಂಗ್ರೆಸ್ ಮೈತ್ರಿ ನಾಯಕರು ನಮ್ಮ ಸಂಖ್ಯಾಬಲ ತೋರಿಸುತ್ತೇವೆ ಎನ್ನುತ್ತಿದ್ದಾರೆ. ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರು ಸೇರಿ ಒಟ್ಟು 107 ಸದಸ್ಯರ ಸಂಖ್ಯಾಬಲವಿದೆ.
Tags:
Karnataka