ಆರೆಸಸ್ಸ್ ರಕ್ತದಾನ ಶಿಬಿರಕ್ಕೆ ಧಾಳಿ ನಡೆಸಿ ದಾಂಧಲೆ ನಡೆಸಿದ "ರೈತರು"

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ಮೇ 20 (ಗುರುವಾರ), ಆರ್‌ಎಸ್‌ಎಸ್ ಮತ್ತು ಬಿಜೆಪಿ ಸ್ವಯಂಸೇವಕರು ಪಂಜಾಬ್‌ನ ರೋಪರ್ ಜಿಲ್ಲೆಯ ನೂರ್ಪುರ್ಬೆಡಿ ಗ್ರಾಮದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಈ ಪ್ರದೇಶದಲ್ಲಿ ತೀವ್ರ ರಕ್ತದ ಕೊರತೆ ಎದುರಾಗಿದ್ದರಿಂದ ಶಿಬಿರವನ್ನು ಆಯೋಜಿಸಲಾಗಿತ್ತು.

ಆದರೆ, ಹಲವಾರು ಪ್ರತಿಭಟನಾ ನಿರತ ‘ರೈತರು’ ರಕ್ತದಾನ ಶಿಬಿರದ ಸ್ಥಳಕ್ಕೆ ತಲುಪಿ ದಾಂಧಲೆ ನಡೆಸಲು ಪ್ರಾರಂಭಿಸಿದ ನಂತರ ಶಿಬಿರವನ್ನು ರದ್ದುಗೊಳಿಸಬೇಕಾಯಿತು. ಈ ಕಾರಣದಿಂದ ಆ ಪ್ರದೇಶಗಳಲ್ಲಿ ಹಲವಾರು ರೋಗಿಗಳಿಗೆ ಆಗುತ್ತಿದ್ದ ಪ್ರಯೋಜನ ತಪ್ಪಿದಂತಾಗಿದೆ. 

‘ರೈತರು’  ಶಿಬಿರದಲ್ಲಿ ಹಾಕಿದ ಕುರ್ಚಿಗಳನ್ನು ಎಸೆದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನ ನೋಡಿ, ಪೊಲೀಸರನ್ನು ಮಧ್ಯಪ್ರವೇಶಿಸುವಂತೆ ಕೇಳಲಾಯಿತು.  ​​ಜನಸಮೂಹವನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಯಬೇಕಾಗಿತ್ತು. ಸಾಕಷ್ಟು ಪ್ರಯತ್ನದ ನಂತರ ಡಿಎಸ್ಪಿ ಆನಂದಪುರ್ ಸಾಹಿಬ್ ರಮೀಂದರ್ ಸಿಂಗ್ ಕಹ್ಲೋನ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿರುವುದರಿಂದ, ಈ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ದಾಂಧಲೆ ನಡೆಸಿದ ’ರೈತರು’, ಆರ್ ಎಸ್ ಎಸ್ ಸ್ವಯಂಸೇವಕರಲ್ಲಿ ದೇಣಿಗೆ ಶಿಬಿರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಶಿಬಿರ ರದ್ದಾದ ಕೂಡಲೇ ರೈತರು ತಮ್ಮ ಧ್ವಜಗಳನ್ನು ಶಿಬಿರದೊಳಗೆ ಇಟ್ಟು ಹರ್ಷೋದ್ಗಾರ ಮಾಡಿದರು.

ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಯಾರೂ ಬಿಜೆಪಿ ಅಥವಾ ಆರ್‌ಎಸ್‌ಎಸ್ ಬೆಂಬಲಿಗರ ಒಡೆತನದ ಅಂಗಡಿಗಳಿಂದ ಯಾವುದೇ ಸರಕುಗಳನ್ನು ಖರೀದಿಸಲು ಅವಕಾಶವಿಲ್ಲ ಎಂದು ಖಚಿತಪಡಿಸಿಕೊಳ್ಳುವುದಾಗಿ ರೈತರು ಬೆದರಿಕೆ ಹಾಕಿದರು.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: Punjab: Farmers raging in protest against RSS's blood donation camp in Ropar, camp canceled after violence  - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News