ನವದೆಹಲಿ: ಮಾರಣಾಂತಿಕ ಕರೋನವೈರಸ್ ಎರಡನೇ ಅಲೆಯಿಂದ ತತ್ತರಿಸಿರುವ ಲಕ್ಷಾಂತರ ಜನರಿಗೆ ಉಚಿತ ಲಸಿಕೆಗಳು ಮತ್ತು ಆಹಾರವನ್ನು ಒದಗಿಸಲು ಭಾರತ ಹೆಚ್ಚುವರಿ 80,000 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ನವೆಂಬರ್ ವರೆಗೆ ಬಡ ಮತ್ತು ಇತರ ಅರ್ಹ ಗುಂಪುಗಳಿಗೆ ಆಹಾರವನ್ನು ಒದಗಿಸಲು ಸರ್ಕಾರವು ಹೆಚ್ಚುವರಿ 70,000 ಕೋಟಿ ರೂ.ಗಳನ್ನು ಮತ್ತು ಉಚಿತ ವ್ಯಾಕ್ಸಿನೇಷನ್ ನೀಡಲು ಆಡಳಿತಕ್ಕೆ ಹೆಚ್ಚುವರಿ 10,000 ಕೋಟಿ ರೂ್ ಅಗತ್ಯವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಮಾಡಿದೆ.
ದೇಶದ ಎಲ್ಲಾ ನಾಗರಿಕರಿಗೆ ಉಚಿತ ಚುಚ್ಚುಮದ್ದನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದರು. ರಾಷ್ಟ್ರೀಯ ದೂರದರ್ಶನದಲ್ಲಿ ಮಾಡಿದ ಭಾಷಣದಲ್ಲಿ ಮೋದಿ, ಇನಾಕ್ಯುಲೇಷನ್ ಡ್ರೈವ್ ವೇಗಗೊಳಿಸಲು ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಭಾರತೀಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಘೋಷಿಸಿದರು.