![og:image](https://blogger.googleusercontent.com/img/b/R29vZ2xl/AVvXsEhaqPDRp1nZi3-68C36Z7NQTGe05NEuD7eNJgLgqcv3gxrzXi0Zgdqvdqo04vxOhQOyPuKAb8QQLlsOBoIYj0LUK-C6gvwBbWIQI0rv_GVSjtwRikr5oRMftSoki7HOl0J4T_pIHr2H8165/s1600-rw/Haji+Mehboob+Bomb+Babri.jpg)
ಅಯೋಧ್ಯ : ಟೈಮ್ಸ್ ನೌ ಟಿ.ವಿ ಚಾನೆಲ್ ಮಾಡಿರುವ ಸೀಕ್ರೆಟ್ ಕ್ಯಾಮೆರಾ ಸಂದರ್ಶನ ಒಂದರಲ್ಲಿ,
ಹಾಜಿ ಮೆಹಬೂಬ್ ಹೇಳಿರುವ ಮಾತುಗಳು ಭಾರತದ ಎಲ್ಲಾ ಸೆಕ್ಯುಲರ್ ಗಳ ರಕ್ತ ಕುದಿಯುವಂತೆ ಮಾಡಿದೆ. , ಹಾಜಿ ಮೆಹಬೂಬ್ ಇವರು ಬಾಬರಿ ಮಸೀದಿ ಕೇಸಿನಲ್ಲಿ ಅರ್ಜಿದಾರರಾಗಿದ್ದು, "ಹಿಂದುಗಳೇನಾದರು ರಾಮಮಂದಿರ ನಿರ್ಮಾಣ ಮಾಡಿದರೆ ಅದನ್ನು ಬಾಂಬ್ ಹಾಕಿ ಧ್ವಂಸ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಾಧುಗಳೊಂದಿಗೆ ಮಾತನಾಡಲು ನಾನು ಬಯಸುವುದಿಲ್ಲ, ನಾವಿಲ್ಲಿ ಕೈಗೆ ಬಳೆ ತೊಟ್ಟು ಕುಳಿತಿಲ್ಲ, ನಾವು ರಾಮ ಮಂದಿರ ನಿರ್ಮಾಣವನ್ನು ಎಂದಿಗೂ ಅನುಮತಿಸುವುದಿಲ್ಲ" ಎಂದಿರುವ ಹಾಜಿ, " 20 ಕಿಮೀ ದೂರದಿಂದ ಏನನ್ನಾದರೂ ಬಾಂಬ್ ಮೂಲಕ ನಾಶಪಡಿಸಬಹುದು" ಎಂದು ಎಚ್ಚರಿಸಿದ್ದಾರೆ.
"ದೇವಸ್ಥಾನವನ್ನು ನಿರ್ಮಿಸಿದರೆ ಅವರಿಗೆ ನಾವು ಯಾರೆಂದು ತೋರಿಸಬೇಕಾಗುತ್ತದೆ " ಎಂದು ಹಿಂದುಗಳನ್ನು ಎಚ್ಚರಿಸಿದ್ದಾರೆ. ಹಾಜಿ ಅವರ ಪ್ರಕಾರ "ನಾವಿಲ್ಲಿ ರಿಮೋಟ್ ಕಂಟ್ರೋಲ್ ಹಿಡಿದು ಏನಾದರೂ ಬೇಕಾದರು ಮಾಡಬಹುದು."
ಈ ಹೇಳಿಕೆ ಮೂಲಕ ಶಾಂತಿಯ ಮೂಲಕ ರಾಮ ಮಂದಿರ ಸಮಸ್ಯೆಗೆ ಪರಿಹಾರ ಕಂಡುಕೊೞಬಹುದೆಂದು ಕನಸುಕಾಣುತ್ತಿದ್ದ ಭಾರತದ ಹಿಂದುಗಳಿಗೆ ಭ್ರಮನಿರಸಣವಾಗಿದೆ.
Tags:
India