ಕೈ ಹಿಡಿದ ಬಿ.ಜೆ.ಪಿ ಶಾಸಕ, ಕಾಂಗ್ರೆಸ್ ನ ಅಹ್ಮದ್ ಪಟೇಲ್ ಜಯ
ಗುಜರಾತ್ಃ ಬಿಜೆಪಿ ಶಾಸಕ ನಳಿನ್ ಭಾಯ್ ಕೊತಾಡಿಯಾ ಅಡ್ಡ ಮತದಾನ ಮಾಡಿರುವುದನ್ನು ಟಿ.ವಿ ಚಾನೆಲ್ ಗಳ ಮುಂದೆ ಬಹಿರಂಗವಾಗಿ ಒಪ್ಪಿಕೊಂಡ ಬಳಿಕ, ಅಹ್ಮದ್ ಪಟೇಲ್ ರಾಜಸಭೆಗೆ ಹೋಗುವುದು ಖಚಿತವಾಗಿದೆ.
ಪಾಟಿದಾರ್ ಜಾತಿಗೆ ಬಿಜೆಪಿ ಯಾವುದೇ ಸಹಾಯಮಾಡದ ಕಾರಣ ನಾನು ಕಾಂಗ್ರೆಸ್ ಗೆ ಮತ ಹಾಕಿರುವುದಾಗಿ ನಳಿನ್ ಭಾಯ್ ಹೇಳಿದ್ದಾರೆ. ಇದರೊಂದಿಗೆ ಗುಜರಾತ್ ನಿಂದ ೨ ಬಿಜೆಪಿ ಮತ್ತು ಒಂದು ಕಾಂಗ್ರೆಸ್ ಸದಸ್ಯರು ರಾಜ್ಯ ಸಭೆಗೆ ಆಯ್ಕೆ ಆಗುವುದು ಖಾತ್ರಿಯಾಗಿದೆ.