ಕೋವಿಡ್ -19 ರಿಂದ ಅನಾಥರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರ್ಕಾರದ ಯೋಜನೆ

og:image
ಸಾಂಕ್ರಾಮಿಕ ರೋಗದಿಂದ ಅನಾಥವಾಗಿರುವ 18 ವರ್ಷ ಒಳಗಿನ ವಯಸ್ಸಿನ ಮಕ್ಕಳನ್ನು ಪುನರ್ವಸತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ವಿಶೇಷ ಮಕ್ಕಳ ಕೋವಿಡ್ -19 ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕರ್ನಾಟಕ ಸರ್ಕಾರ ಮಂಗಳವಾರ ಪ್ರಕಟಿಸಿದೆ.

"ಕೋವಿಡ್ -19 ರ ಎರಡನೇ ಅಲೆಯಿಂದ ಅನಾಥರಾದ ಮಕ್ಕಳನ್ನು ಪುನರ್ವಸತಿ ಮಾಡಲು ಸರ್ಕಾರ ಸಿದ್ಧವಾಗಿದೆ. 18 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಕ್ವಾರಂಟೈನ್ ಸೆಂಟರ್ ಮತ್ತು ಹಾಸ್ಟೆಲ್‌ಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದರಿಂದ ಮಕ್ಕಳು ಭಯಪಡಬೇಕಾಗಿಲ್ಲ ”ಎಂದು ಜೊಲ್ಲೆ ದೃ್ಡಪಡಿಸಿದರು.

 “ಇಲಾಖೆಯಿಂದ ಹೇಳಲ್ಪಟ್ಟ ಷರತ್ತುಗಳಲ್ಲಿ, ಕೋವಿಡ್ -19 ರ ಕಾರಣದಿಂದಾಗಿ ಇಬ್ಬರೂ ಹೆತ್ತವರ ನಿಧನ, ಇಬ್ಬರೂ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರೆ, ಅವರಲ್ಲಿ ಒಬ್ಬರು (ತಂದೆ / ತಾಯಿ) ಸೋಂಕಿನಿಂದ ಸತ್ತರೆ ಅಥವಾ ಒಬ್ಬರು ತೀರಿಕೊಂಡು ಇನ್ನೊಬ್ಬರು  ಬೇರೆ ಪ್ರದೇಶದಲ್ಲಿ ಜೀವಿಸುತ್ತಿದ್ದರೆ ಅಂಥಹ ಮಕ್ಕಳಿಗೂ ಪುನರ್ವಸತಿ ಕಲ್ಪಿಸಲಾಗುವದು” ಎಂದು ಜೊಲ್ಲೆ ವಿವರಿಸಿದರು.

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post