ಸೂಪರ್ ಸ್ಟಾರ್ ಉಪೇಂದ್ರ ಕರ್ನಾಟಕದ ಮುಂದಿನ ಮುಖ್ಯಮಂತ್ರಿ - ಹೇಗೆ ಗೊತ್ತಾ?

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕು! ನೀವು ನನ್ನ ಗೆಲ್ಲಿಸುತ್ತೀರ? ಎಂದು ಕೇಳುತ್ತಿದ್ದರೆ, ಕನ್ನಡದ ಸುಪರ್ ಸ್ಟಾರ್ ಉಪೇಂದ್ರ. 

ಈ ಹಿಂದೆ  ಸಿನಿಮಾದಲ್ಲಿ ತಲೆಗೆ ಹುಳಬಿಟ್ಟು ಜನರನ್ನು ಹುಚ್ಚೆಬ್ಬಿಸಿ, ಅಭಿಮಾನಿಗಳ ದಂಡೇ ಪಡೆದಿದ್ದ ಉಪೇಂದ್ರ, ಈಗ ರಾಜಕೀಯ, ಅಲ್ಲ... ಪ್ರಜಾಕೀಯ ಮಾಡಲು ಹೊರಟಿರುವುದು ನಿಮಗೆಲ್ಲಾ ಗೊತ್ತೇ ಇದೆ. 

ಇಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದ ಉಪೇಂದ್ರ, ಇಂದು ಹೊಸದಾಗಿ ತಮ್ಮ ಆಲೋಚನೆ ಹರಿದುಬಿಟ್ಟಿದ್ದಾರೆ. 

ಅದೇನೆಂದರೆ, ಉಪೇಂದ್ರ ಚುನಾವಣೆ ಸ್ಪರ್ಧಿಸುವುದಿಲ್ಲ, ಆದರೆ ಅವರ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕಡೆ ಸ್ಪರ್ಧಿಸುತ್ತಾರೆ, ಪಕ್ಷಕ್ಕೆ ಬಹುಮತ ಬಂದರೆ ಉಪೇಂದ್ರ ಮುಖ್ಯಮಂತ್ರಿ. 

"ನಾನು ಸಮಾಜ ಸೇವೆ ಮಾಡಿದ್ದೀನಿ, ರೈತರಿಂದ ಬೆಳೆ ಕೊಂಡೂ ಕಷ್ಟದಲ್ಲಿರುವವರಿಗೆ ಉಚಿತವಾಗಿ ಹಂಚಿದ್ದೀನಿ, ಆಡಳಿತ ಮತ್ತು ವಿರೋಧಪಕ್ಷ ಎರಡನ್ನೂ ಪ್ರಶ್ನೆ ಮಾಡಿದ್ದೀನಿ. ಅವೆರಡನ್ನೂ ಕಿತ್ತಾಕಿ ನನಗೆ ಒಂದು ಅವಕಾಶ ಕೊಡಿ’  ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. 

"ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ! ನನ್ನನ್ನ ಗೆಲ್ಲಿಸ್ತೀರಾ??? " ಎಂದು ಪ್ರಶ್ನಿಸಿದ್ದಾರೆ. 

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: Upendra want to be next chief minister of Karnataka. Prajakiya party Upendra election. - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News