ಕರ್ನಾಟಕ: ಎರಡು ಗೋ ಹತ್ಯೆ ಪ್ರಕರಣವನ್ನು ಭೇದಿಸಿದ ಹಿಂದೂ ಕಾರ್ಯಕರ್ತರು

og:image

ಮಡಿಕೇರಿ: ಎಸ್ಟೇಟ್‌ನಲ್ಲಿ ಎರಡು ಗೋವುಗಳನ್ನು ಕೊಂದು, ಮಾಂಸದ ಅವಶೇಷಗಳನ್ನು ಹೂತು ಹಾಕಿದ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭೇದಿಸಿದ್ದಾರೆ. ಎಸ್ಟೇಟ್ ಮಾಲೀಕರ ವಿರುದ್ಧ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ, ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಗರಂಗಂದೂರು 'ಬಿ' ಗ್ರಾಮದ ಹಾರಂಗಿ ಹಿನ್ನೀರು ಪ್ರದೇಶದ ಬಳಿಯ ಲತೀಫ್ ಎಂಬುವವರ ಎಸ್ಟೇಟ್‌ನೊಳಗೆ ದೂರುದಾರರೊಂದಿಗೆ ಸುಂಟಿಕೊಪ್ಪ ಪೊಲೀಸರು ಭಾನುವಾರ ಧಾಳಿ ಮಾಡಿದರು. 

ಹೊಸತೋಟ ಮತ್ತು ಮಾದಾಪುರದ ಕಾರ್ಮಿಕರು ಮತ್ತು ಸ್ಥಳೀಯ ವೇದಿಕೆ ಕಾರ್ಯಕರ್ತರು, ಪ್ರತ್ಯಕ್ಷದರ್ಶಿಗಳು ಎಸ್ಟೇಟ್‌ನಲ್ಲಿ ಹಸುಗಳನ್ನು ಎಲ್ಲಿ ಕೊಲ್ಲಲಾಗಿದೆ ಎಂಬುದನ್ನು ಪೊಲೀಸರಿಗೆ ತೋರಿಸಿದರು. ಸುಂಟಿಕೊಪ್ಪ ಅಪರಾಧ ತನಿಖಾ ಎಸ್‌ಐ ಸ್ವಾಮಿ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎರಡು ಹಸುಗಳ ಚರ್ಮ ಮತ್ತು ಆಂತರಿಕ ಅಂಗಗಳನ್ನು ಮಣ್ಣಿನಲ್ಲಿ ಹೂತಿಟ್ಟಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಎಸ್ಟೇಟ್ ಮಾಲೀಕ ಲತೀಫ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದೇ ವೇಳೆ ಹಿಂದೂ ಜರಣಾ ವೇದಿಕೆ ಪದಾಧಿಕಾರಿಗಳಾದ ಸುನೀಲ್ ಮತ್ತು ವಿನು, ಕೊಡಗಿನಲ್ಲಿ ಇಂತಹ ಗೋಹತ್ಯೆ ಘಟನೆಗಳು, ವಿಶೇಷವಾಗಿ ಒಂದು ಸಮುದಾಯದ ಕಿಡಿಗೇಡಿಗಳಿಂದ ನಡೆಯುತ್ತಿವೆ. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಹಸುಗಳನ್ನು ಕೊಲ್ಲುವವರ ವಿರುದ್ಧ ಕೊಡಗು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Previous Post Next Post