ಇತ್ತೀಚೆಗೆ ನಟ ದರ್ಶನ್ ತೂಗುದೀಪ, ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಪರವಾಗಿ ಮಾಡಿದ ಮನವಿಯೊಂದು ರಾಜ್ಯಾದ್ಯಂತ ಮೃಗಾಲಯಗಳ ಲಕ್ ಬದಲಾಯಿಸಿದೆ. ಈಗ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮ್ರಗಾಲಯಗಳು, ಈಗ ಸಂತೋಷ ಮತ್ತು ಭರವಸೆಯೊಂದಿಗೆ ಬೀಗುತ್ತಿವೆ. ಅಧಿಕಾರಿಗಳು ಶೇರ್ ಮಾಡಿರುವ ಅಂದಾಜಿನ ಪ್ರಕಾರ ಕಳೆದ ವಾರದಲ್ಲಿ ಪ್ರಾಣಿಗಳ ದತ್ತು ಮೂಲಕ ಸಂಗ್ರಹಿಸಿದ ದೇಣಿಗೆ ಹಣ ಬರೋಬ್ಬರಿ 1 ಕೋಟಿ ರೂ.
ಝೂ ಅಥೋರಿಟಿ ಆಫ್ ಕರ್ನಾಟಕ, ಜುಲೈ 29, 2020 ರಿಂದ 2021 ರ ಜೂನ್ 4 ರವರೆಗೆ 17,96,700 ದೇಣಿಗೆ ಸಂಗ್ರಹಿಸಿತ್ತು, ಆದರೆ ತೂಗುದೀಪ ದರ್ಶನ್, ಜನರಲ್ಲಿ ಮನವಿ ಮಾಡಿ, ಕರ್ನಾಟಕದ ಮ್ರಗಾಲಯಗಳಲ್ಲಿರುವ ಪ್ರಾಣಿಗಳಿಗೆ ನೆರವಾಗಿ ಎಂದು ಕೋರಿದ್ದರು. ಅಂದಿನಿಂದ ಅಂದರೆ ಜೂನ್ 5 ರಿಂದ 10 ರವರೆಗೆ 1,00,47,900 ರೂಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.